August 16, 2026

Month: August 2026

ರೈತರಿಗೆ ಕೃಷಿ ಚಟುವಟಿಕೆ ಮಾಡಲು ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹ

ಬನ್ನೂರು ಹೋಬಳಿಗೆ ಆಗಮಿಸಿದ ಮಾಜಿ ಸಚಿವರು ಹಾಲಿ ಶಾಸಕರು ಆದ ಎಚ್ ಸಿ ಮಾದೇವಪ್ಪ ಅವರನ್ನು ಮಾರ್ಗ ಮಧ್ಯದಲ್ಲಿ ಭೇಟಿ ಮಾಡಿ ರೈತರ ಸಮಸ್ಯೆಗಳ ಕುರಿತು ಬನ್ನೂರು...

ಶಾಂತಿ ಕ್ರಾಂತಿ’ ಸಿನಿಮಾದ ರೀ-ರಿಲೀಸ್‌ ಬಗ್ಗೆ ರವಿಚಂದ್ರನ್‌ ಹಿರಿಮಗ ಮನೋರಂಜನ್‌ ಹೇಳಿದ್ದೇನು? 35ವರ್ಷಗಳ ಕನಸು ನನಸಾಗುತ್ತಾ?

ಶಾಂತಿ ಕ್ರಾಂತಿ’ ಸಿನಿಮಾ ಮರು ಬಿಡುಗಡೆ ಕುರಿತು ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸೋಷಿಯಲ್‌ ಮೀಡಿಯಾದಲ್ಲಿ ‘ಶಾಂತಿ ಕ್ರಾಂತಿ’ ಸಿನಿಮಾ ಮರುಬಿಡುಗಡೆ ಮಾಡಿ ಎಂದು ಹ್ಯಾಷ್‌ಟ್ಯಾಗ್‌ಗಳ ಮೂಲಕ ಜನತೆ ಕೇಳುತ್ತಿದ್ದಾರೆ....

ನೊಂದ ಮಹಿಳೆಯರಿಗಾಗಿ ಮಹಿಳೆಯರಿಂದಲೇ ಪ್ರಾರಂಭವಾದ ಜನಶಕ್ತಿ ವೇದಿಕೆ

ನೊಂದ ಮಹಿಳೆಯರಿಗಾಗಿ ಮಹಿಳೆಯರಿಂದಲೇ ಪ್ರಾರಂಭವಾದ ಜನಶಕ್ತಿ ವೇದಿಕೆ ಆಗಸ್ಟ್ 13, ಮೈಸೂರು ; ಅಖಿಲ ಕರ್ನಾಟಕ ಜನಶಕ್ತಿ ವೇದಿಕೆ ಹೊಸದಾಗಿ ಪ್ರಾರಂಭವಾದ ಹಿನ್ನೆಲೆ ಸಂಘಟನೆಯನ್ನು ಬಳಪಡಿಸಲು ರಾಜ್ಯಾಧ್ಯಕ್ಷರಾದ...

ಆರತಿ ಉಕ್ಕಡ ಅಹಲ್ಯದೇವಿಗೆ ಪೂಜೆ ಸಲ್ಲಿಸಿದ ನಟ ಶೋಭರಾಜ್

ಭೀಮನ ಅಮಾವಾಸ್ಯೆ ಹಿನ್ನೆಲೆ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಶ್ರೀ ಶೋಭರಾಜ್ ಅವರು ಕುಟುಂಬ ಸಮೇತರಾಗಿ ಶ್ರೀ ಆರತಿ ಉಕ್ಕುಡ ಶ್ರೀ ಅಹಲ್ಯದೇವಿ ಅಮ್ಮನ ಸನ್ನಿಧಿಯಲ್ಲಿ ವಿಶೇಷ...

ಅರಣ್ಯ ಕಡಿದು ತಂಗಿನ ಸಸಿಗಳನ್ನ ನೆಟ್ಟು ಅತಿಕ್ರಮಣಕ್ಕೆ ಯತ್ನಿಸಿದ ಕಿಡಿಗೇಡಿಗಳು

ಕೆ.ಆರ್.ಪೇಟೆ: ಅರಣ್ಯ ಕಡಿದು ತೆಂಗಿನ ಸಸಿಗಳನ್ನು ನೆಟ್ಟು ಅತಿಕ್ರಮಣಕ್ಕೆ ಯತ್ನಿಸಿದ ಕಿಡಿಗೇಡಿಗಳು! ಕೆ.ಆರ್.ಪೇಟೆ: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮಾಚಗೋನಹಳ್ಳಿ ಗ್ರಾಮದ ಎಲ್ಲೆಯಲ್ಲಿರುವ ಸರ್ವೆ...

ನೇರಲ್ಕೆರೆ ಬನ್ನೂರು ಗಡಿಭಾಗ ಮರಯ್ಯನಕೆರೆಗೆ ನೀರು ತುಂಬಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮೂಲ ಸಂಘಟನೆ ಮೈಸೂರು ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ನೇತೃತ್ವದಲ್ಲಿ ಪ್ರತಿಭಟನೆ

ಹಮ್ಮಿಕೊಂಡಿದ್ದು ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಕೆರೆಗಳಿಗೆ ನೀರು ತುಂಬಿಸಿದ ಜಿಲ್ಲಾ ಆಡಳಿತ ಹಾಗೂ ನೀರಾವರಿ ಅಧಿಕಾರಿಗಳ ವಿರುದ್ಧ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಕೂಡಲೇ ನೀರು...

ಕೆ.ಆರ್.ಐ.ಡಿ.ಎಲ್ ಮೈಸೂರು ಸಂಸ್ಥೆಯ ಇಇ ಅಧಿಕಾರಿ ಕೆ.ಶೋಭಾ ರವರ ಭ್ರಷ್ಟಾಚಾರದ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ.

.ಕೆ ಆರ್.ಐ.ಡಿ.ಎಲ್ ಮೈಸೂರು ಕಚೇರಿ ನವೀಕರಣ ಕೆಲಸಕ್ಕೆ ಬಿಡುಗಡೆ ಆಗಿದ್ದ ಸರ್ಕಾರಿ ಹಣವನ್ನು ದುರ್ಬಳಕೆ ಮಾಡಿಕೊಂಡ ಆರೋಪ ಇಇ ಅಧಿಕಾರಿ ಕೆ ಶೋಭಾ ವಿರುದ್ಧ ಈ ಕೂಡಲೇ...

ದಕ್ಷ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ–2026 ಪದವಿ ಶಿಕ್ಷಣದ ಅಂತ್ಯವಲ್ಲ; ನಿರಂತರ ಕಲಿಕೆಯ ಹೊಸ ಅಧ್ಯಾಯ” – ಪ್ರೊ. ಎನ್. ಕೆ. ಲೋಕನಾಥ್  ಮೈಸೂರು, ಆಗಸ್ಟ್ 8: ಮೈಸೂರಿನ ದಕ್ಷ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಪದವಿ ಪ್ರದಾನ ಸಮಾರಂಭ–2026 ಕಾಲೇಜಿನ ಶೈಕ್ಷಣಿಕ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿ ಪರಿಣಮಿಸಿತು. 2024–25ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶ ಪಡೆದ ಪ್ರಥಮ ಸ್ನಾತಕೋತ್ತರ ಬ್ಯಾಚ್‌ನ MBA ಮತ್ತು MCA ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಪದವಿ ಪಡೆದರು.  ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಎನ್. ಕೆ. ಲೋಕನಾಥ್ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಗ್ಲೋಬಲ್ ಎಜುಕೇಶನ್ ಟ್ರಸ್ಟ್, ಮೈಸೂರು, ಅಧ್ಯಕ್ಷರಾದ ಡಾ. ಜಯಚಂದ್ರ ರಾಜು ಪಿ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಕ್ಷ ಪ್ರಥಮ ದರ್ಜೆ ಕಾಲೇಜಿನ ಉನ್ನತ ಶಿಕ್ಷಣ ನಿರ್ದೇಶಕ ಶ್ರೀ ಹರೀಶ್ ಪಿ. ಅವರು ಗಣ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ವಿ. ಸುರೇಶ್, IQAC ಸಂಯೋಜಕಿ ಹಾಗೂ MBA ವಿಭಾಗದ ಮುಖ್ಯಸ್ಥೆ ಡಾ. ಅರ್ಪಿತಾ ಎಚ್. ಆರ್., MCA ವಿಭಾಗದ ಮುಖ್ಯಸ್ಥೆ ಶ್ರೀಮತಿ ಸುಧಾ ಎಂ., ಗ್ಲೋಬಲ್ ಎಜುಕೇಶನ್ ಟ್ರಸ್ಟ್‌ನ ಸದಸ್ಯರು, ಬೋಧಕ ವರ್ಗ, ಪೋಷಕರು ಹಾಗೂ ಪದವೀಧರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಪದವೀಧರರನ್ನುದ್ದೇಶಿಸಿ ಮಾತನಾಡಿದ ಪ್ರೊ. ಲೋಕನಾಥ್, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಅಭಿನಂದಿಸಿ, ಅವರ ಯಶಸ್ಸಿನ ಹಿಂದೆ ಪೋಷಕರು, ಶಿಕ್ಷಕರು ಹಾಗೂ ಮಾರ್ಗದರ್ಶಕರ ಕೊಡುಗೆ ಮಹತ್ವದ್ದಾಗಿದೆ ಎಂದು ಹೇಳಿದರು. ಕೃತಕ ಬುದ್ಧಿಮತ್ತೆ, ಡಿಜಿಟಲ್ ತಂತ್ರಜ್ಞಾನ, ದತ್ತಾಂಶ ವಿಶ್ಲೇಷಣೆ, ಸುಸ್ಥಿರ ಅಭಿವೃದ್ಧಿ ಹಾಗೂ ಉದ್ಯಮಶೀಲತೆಯಂತಹ ಕ್ಷೇತ್ರಗಳ ವೇಗದ ಬೆಳವಣಿಗೆಯಿಂದ ವೃತ್ತಿಪರ ಜಗತ್ತು ನಿರಂತರವಾಗಿ ಬದಲಾಗುತ್ತಿದೆ ಎಂದು ಅವರು ತಿಳಿಸಿದರು. “ಪದವಿ ಪಡೆಯುವುದು ಶಿಕ್ಷಣದ ಅಂತ್ಯವಲ್ಲ; ಅದು ನಿರಂತರ ಕಲಿಕೆಯ ಹೊಸ ಆರಂಭ” ಎಂದು ಅವರು ಹೇಳಿದರು. ಬದಲಾಗುತ್ತಿರುವ ವೃತ್ತಿಪರ ಪರಿಸರದಲ್ಲಿ ಪ್ರಸ್ತುತವಾಗಿರಲು ವಿದ್ಯಾರ್ಥಿಗಳು ಕಲಿಯುವುದು, ಕಲಿತದ್ದನ್ನು ಅಗತ್ಯಕ್ಕೆ ತಕ್ಕಂತೆ ಮರುಪರಿಶೀಲಿಸುವುದು ಹಾಗೂ ಹೊಸ ವಿಷಯಗಳನ್ನು ಪುನಃ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿದ್ಯುತ್ ಸಂಪರ್ಕ ನೀಡಲು ಲಂಚ: 1.50 ಲಕ್ಷ ರೂ ಪಡೆಯುತ್ತಿದ್ದಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ Bescom ಎಇಇ ನಾಗರತ್ನ

ಬೆಂಗಳೂರು: 1.50 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ Bescom ಎಇಇ ಮತ್ತು ಜೆಇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಹೊಸ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ...

ಭಾರತೀಯ ಭಾಷಾ ಸಂಸ್ಥಾನದಲ್ಲಿ ಕನ್ನಡನಾಡು ಮತ್ತು ಹೊರನಾಡಿನ ಕನ್ನಡ ಶಾಸನಗಳ ಕುರಿತು ಕಾರ್ಯಾಗಾರ

ಭಾರತೀಯ ಭಾಷಾ ಸಂಸ್ಥಾನದಲ್ಲಿ ಕನ್ನಡನಾಡು ಮತ್ತು ಹೊರನಾಡಿನ ಕನ್ನಡ ಶಾಸನಗಳ ಕುರಿತ ಕಾರ್ಯಾಗಾರದ ಎರಡನೇ ದಿನದ ವಿಚಾರಗೋಷ್ಠಿಗಳು ಯಶಸ್ವಿ ಮೈಸೂರು, ಆ. 6: ಭಾರತೀಯ ಭಾಷಾ ಸಂಸ್ಥಾನದ...